Thursday, 29 September 2016

ವಿಧೂಷಕ

ಕಣ್ಣಂಚಲಿ ಹನಿ ಮೂಡಿದೆ
ಹೃದಯ ಬಿಕ್ಕಿ ಅಳುತಿದೆ
ಕನಸಿಗೆ ಕಾರ್ಮೋಡ ಕವಿದಿದೆ
ಮನಸೀಗ ಒಡೆದ ಕನ್ನಡಿಯಾಗಿದೆ

ಪ್ರತಿಯೊಂದು ಬಿಂಬ ನನ್ನ ನೋಡಿ ನಗುತಿರಲು
ಕೂಡಿಟ್ಟ ಕನಸು ಒಂದೊಂದೆ ಮರೆಮಾಚುತಿರಲು
ಜೀವವೇ ಕೂಗಿ ಕರೆದರೂ ಏಕೆ ದೂರಾದೆ ನೀ
ಶ್ವಾಸವೇ ನಿನಗಾಗಿ ತಿಳಿದಿದ್ದರೂ ತೊರೆದೆಯಾ ನೀ

ಹೊರಗೆ ಮಾತು ನೂರಿದ್ದರು
ಒಳಗೆ ಏಕಾಂತದಿ ಕಾಡುವ ಮೌನ
ಜಗದೆದುರು ವಿಧೂಷಕನಂತಿದ್ದರು
ಗುಂಡಿಗೆಯ ಗೂಡೊಳಗೆ ನೋವಿನ ನರ್ತನ

ನಿರಾಸೆಯ ಕಾರ್ಮೋಡ ಸರಿದು
ಸಂತೋಷದ ಬೆಳಕು ಹರಿವುದೆಂತು
ಬಯಕೆಗಳ ಬತ್ತಳಿಕೆ ಕೈಲಿ ಹಿಡಿದು
ಕಾಯುತಿರುವೆ ಭರವಸೆಯಲಿ ನಿಂತು

No comments:

Post a Comment