Monday, 22 September 2014

ಒಳ್ಳೆಯವರು... ಕೆಟ್ಟವರು...

ಒಂದು ಪಕ್ಷಿಯು ಚಳಿಗಾಲದ ತಣ್ಣನೆಯ ಅನುಭವವನ್ನು ಪಡೆಯಲು ತನ್ನ ಗೂಡಿನಿಂದ ಹೊರಬಂದು ಆಕಾಶದಲ್ಲಿ ಹಾರಲು ಪ್ರಾರಂಭಿಸಿತು. ಸ್ವಲ್ಪ ಸಮಯದ ನಂತರ ಚಳಿಯು ಹೆಚ್ಚಾದ ಕಾರಣ ಪಕ್ಷಿಯ ಮೈಯೆಲ್ಲಾ ಹೆಪ್ಪುಗಟ್ಟಿ ಹಾರಲಾಗದೆ ನೆಲದ ಮೇಲೆ ಬಿದ್ದಿತು. ಪಕ್ಷಿಯು ಅಲ್ಲೇ ಬಿದ್ದಿರುವಾಗ ಅದೇ ದಾರಿಯಲ್ಲಿ ಹೋಗುತ್ತಿದ್ದ ಒಂದು ಹಸು ಅದರ ಮೇಲೆ ಸಗಣಿ ಹಾಕಿತು. ಬಿಸಿ ಸಗಣಿಯ ಬೆಚ್ಚನೆಯ ಅನುಭವವು ಪಕ್ಷಿಗೆ ಎಚ್ಚರವಾಗುವಂತೆ ಮಾಡಿತು. ಆ ಹಿತಾನುಭವದಿಂದ ಖುಷಿಯಾದ ಪಕ್ಷಿಯು ಅಲ್ಲೇ ಸ್ವಲ್ಪ ಸಮಯವನ್ನು ಕಳೆಯಲು ನಿರ್ಧರಿಸಿ ಸಂತೋಷದಿಂದ ಹಾಡಲಾರಂಭಿಸಿತು. ಅಲ್ಲೇ ದೂರದಲ್ಲಿದ್ದ ಒಂದು ಬೆಕ್ಕಿನ ಕಿವಿಗೆ ಆ ಹಾಡು ಬೀಳುತ್ತದೆ. ಹಾಡಿನ ಧ್ವನಿಯನ್ನೇ ಹಿಂಭಾಲಿಸಿಕೊಂಡು ಬಂದ ಬೆಕ್ಕು ಆ ಪಕ್ಷಿಯನ್ನು ಸಗಣಿಯಿಂದ ಮೇಲಕ್ಕೆತ್ತಿ ತಿಂದು ಹಾಕಿತು.

ಕಥೆಯ ನೀತಿಗಳು
1) ನಿಮಗೆ ಕಿರಿಕಿರಿ ಉಂಟುಮಾಡುವವರೆಲ್ಲರೂ ನಿಮಗೆ ಕೆಟ್ಟದ್ದನ್ನು ಮಾಡುತ್ತಿದ್ದಾರೆ ಎಂದಲ್ಲ.
2) ನಿಮಗೆ ಸಹಾಯ ಮಾಡುವವರೆಲ್ಲರೂ ನಿಮಗೆ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದಲ್ಲ.
3) ಕೊನೆಯದಾಗಿ, ನೀವು ತುಂಬಾ ಆಳವಾದ ತೊಂದರೆಯಲ್ಲಿರುವಾಗ ಬಾಯ್ಮುಚ್ಚಿಕೊಂಡಿರುವುದು ಬಹಳಾ ಒಳ್ಳೆಯದು.

ಅರ್ಥಹೀನ ಕೆಲಸಗಳನ್ನು ಮಾಡಬೇಡಿ...!

ತುಂಬಾ ಒಳ್ಳೆಯ ಸ್ನೇಹಿತರಾಗಿದ್ದ ಕೋಳಿ ಮತ್ತು ಗೂಳಿ ಇಬ್ಬರು ತಮ್ಮ ಇಷ್ಟಗಳ ಬಗ್ಗೆ ಮಾತನಾಡುತ್ತಿರುವಾಗ ಕೋಳಿಯು, "ನನಗೆ ಆ ಮರದ ತುದಿಗೆ ಏರಬೇಕೆಂಬ ಬಯಕೆ. ಆದರೆ, ನನಗೆ ಅಷ್ಟು ಶಕ್ತಿ ಇಲ್ಲ" ಎಂದು ಅಲ್ಲಿದ್ದ ಒಂದು ಮರವನ್ನು ತೋರಿಸಿ ಹೇಳಿತ್ತದೆ. ಅದಕ್ಕೆ ಗೂಳಿಯು, "ನನ್ನ ಸಗಣಿಯಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿರುವುದರಿಂದ ನೀನು ಏಕೆ ಅದನ್ನು ತಿಂದು ಶಕ್ತಿವಂತನಾಗಬಾರದು" ಎಂದು ಸಲಹೆ ನೀಡಿತ್ತದೆ. ಗೂಳಿಯ ಈ ಮಾತಿನಿಂದ ಸಾಕಷ್ಟು ಉತ್ಸುಕವಾದ ಕೋಳಿಯು ಅಲ್ಲೆ ಇದ್ದ ತಿಪ್ಪೆಯ ಬಳಿ ಹೋಗಿ  ಸಾಕಾಗುವಷ್ಟು ಸಗಣಿಯನ್ನು ತಿಂದು ಮರ ಹತ್ತಲು ಪ್ರಯತ್ನಿಸಿ ಮರದ ಮೊದಲ ಕೊಂಬೆಯನ್ನು ಏರುವಲ್ಲಿ ಸಫಲವಾಯಿತು. ಮಾರನೆಯ ದಿನ ಮತ್ತಷ್ಟು ಸಗಣಿಯನ್ನು ತಿನ್ನುವ ಮೂಲಕ ಎರಡನೆಯ ಕೊಂಬೆಯನ್ನೇರಿತು. ಹೀಗೆ ಪ್ರತಿದಿನ ಪ್ರಯತ್ನಿಸುತ್ತಾ ಕಡೆಯದಾಗಿ ನಾಲ್ಕನೆಯ ದಿನದಂದು ಕೋಳಿಯು ಮರದ ತುದಿಯನ್ನು ಏರುವಲ್ಲಿ ಯಶಸ್ವಿಯಾಯಿತು. ಮರದ ತುದಿ ಏರುತ್ತಿದ್ದಂತೆ ಆ ಕೋಳಿ ಒಬ್ಬ ಬೇಟೆಗಾರನ ಕಣ್ಣಿಗೆ ಬಿದ್ದು ಅವನ ಗುಂಡೇಟಿಗೆ ಬಲಿಯಾಯಿತು.


ಕಥೆಯ ನೀತಿ:-"ಕೆಲವೊಮ್ಮೆ  ಅರ್ಥಹೀನ ಕೆಲಸಗಳನ್ನು ಮಾಡುವುದರಿಂದ ನಾವು ಉನ್ನತ ಸ್ಥಾನಕ್ಕೇರಬಹುದು. ಆದರೆ, ಆ ಕೆಲಸಗಳು ಎಂದಿಗೂ ನಮ್ಮನ್ನು ಅದೇ ಸ್ಥಾನದಲ್ಲಿ ಮುಂದುವರೆಯುವಂತೆ ಮಾಡಲಾರವು"

Sunday, 21 September 2014

ಹಿಟ್ಲರ್ ಬಗ್ಗೆ ಗೊತ್ತಿಲ್ಲದ 15 ಸಂಗತಿಗಳು

1) ಹಿಟ್ಲರ್ ನಾಲ್ಕು ವರ್ಷದವನಿದ್ದಾಗ ಒಬ್ಬ ಪಾದ್ರಿಯು ಆತನನ್ನು ನೀರಿನಲ್ಲಿ ಮುಳುಗಿ ಸಾಯುವುದರಿಂದ ರಕ್ಷಿಸಿದ್ದ.
2) ಹಿಟ್ಲರ್ ಮೊದಲು ಪ್ರೀತಿಸಿದ್ದು ಯಹೂದಿ ಹುಡುಗಿಯನ್ನು. ಆದರೆ ಧೈರ್ಯ ಸಾಲದೆ ಅದನ್ನು ಆಕೆಗೆ ತಿಳಿಸಲಿಲ್ಲ.
3) ಆಧುನಿಕ ಇತಿಹಾಸದಲ್ಲಿ ಮೊದಲ ಬಾರಿಗೆ ಧೂಮಪಾನ ವಿರೋಧಿ ಚಳುವಳಿಯ ನೇತೃತ್ವ ವಹಿಸಿದ್ದು ಹಿಟ್ಲರ್.
4) ಮೊದಲ ಮಹಾಯುದ್ಧದಲ್ಲಿ ಒಬ್ಬ ಬ್ರಿಟಿಷ್ ಸೈನಿಕ ಗಾಯಗೊಂಡಿದ್ದ ಜೆರ್ಮನ್ ಸೈನಿಕನೊಬ್ಬನ ಜೀವ ಉಳಿಸಿದ್ದ. ಜೀವದಾನ ಪಡೆದ ಆ ಸೈನಿಕ ಮತ್ಯಾರು ಅಲ್ಲ ಅಡಾಲ್ಫ್ ಹಿಟ್ಲರ್.
5) ಹಿಟ್ಲರ್ ಒಂದೇ ವೃಷಣ (testicle) ಹೊಂದಿದ್ದ.
6) ಹಿಟ್ಲರ್ ಸಸ್ಯಹಾರಿಯಾಗಿದ್ದ ಹಾಗೂ ಪ್ರಾಣಿಹಿಂಸೆಯ ವಿರುದ್ಧ ಹಾಲವಾರು ಕಾನೂನುಗಳನ್ನು ಹೊರಡಿಸಿದ್ದ.
7) ಹಿಟ್ಲರ್ ಜೈಲಿನಲ್ಲಿದ್ದಾಗ ಮರ್ಸಿಡಿಸ್ ಕಂಪನಿಗೆ ಒಂದು ಕಾರನ್ನು ಸಾಲ ಕೇಳಿ ಪತ್ರ ಬರೆದಿದ್ದ.
8) ಹಿಟ್ಲರನ ಕುಟುಂಬದ ಆರ್ಥಿಕ ಸಂಕಷ್ಟಗಳ ಕಾರಣಗಳಿಂದ ಯಹೂದಿ ವೈದ್ಯನೊಬ್ಬ ಅವರಿಗೆ ಉಚಿತವಾಗಿ ಚಿಕೆತ್ಸೆ ನೀಡುತಿದ್ದ.
9) ಹಿಟ್ಲರ್ ಒಂದು ಕಲಾ ಶಾಲೆಯಿಂದ ತಿರಸ್ಕರಿಸಲ್ಪಟ್ಟಿದ್ದನು.
10) ಹಿಟ್ಲರ್ ಸಿಹಿ ತಿನಿಸುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದನು.
11) ಹಿಟ್ಲರ್ ಕೊಕೇನ್ ದಾಸನಾಗಿದ್ದನು. ಅವನು ದಿನಕ್ಕೆ ಎರಡು ಬಾರಿ ಇನ್ಹೇಲರ್ ಮೂಲಕ ಕೊಕೇನ್ ಸೇವಿಸುತ್ತಿದ್ದನು ಹಾಗೂ ಕೊಕೇನಿಂದ ಮಾಡಿದ ಕಣ್ಣಿನ ಡ್ರಾಪ್ಸ್ ಬಳಸುತ್ತಿದ್ದನು.
12) ಹಿಟ್ಲರ್'ಗೆ ಡಿಸ್ನಿ ಕಾರ್ಟೂನ್ ಅಂದರೆ ತುಂಬಾ ಪ್ರೀತಿ.
13) ಹಿಟ್ಲರ್ ದಂತವೈದ್ಯರನ್ನು ದ್ವೇಷಿಸುತ್ತಿದ್ದನು.
14) ಹಿಟ್ಲರ್'ಗೆ ತನ್ನ ಮೀಸೆ ಅಂದ್ರೆ ತುಂಬಾ ಪ್ರೀತಿ ಹಾಗೂ ಆತ ಯಾವಾಗಲೂ "ಮೀಸೆ ಬಿಡುವುದು ಒಂದು ಪ್ರವೃತ್ತಿಯಾಗಿಲ್ಲ ಆದ್ರೆ ಇನ್ನು ಮುಂದೆ ತಾನು ಮೀಸೆ ಬಿಟ್ಟಿರುವ ಕಾರಣ ಅದು ಪ್ರವೃತ್ತಿಯಾಗಲಿದೆ" ಎಂದು ಹೇಳುತ್ತಿದ್ದನು.
15) ಹಿಟ್ಲರ್ ಕ್ರೋನಿಕ್ ಫ್ಲಾಟುಲೆನ್ಸ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದನು. ಮತ್ತು ಅದಕ್ಕಾಗಿ 28 ವಿವಿಧ ಬಗೆಯ ಔಷಧಗಳನ್ನು ತೆಗೆದುಕೊಂಡಿದ್ದನು.

Friday, 19 September 2014

ಷೇರ್ ಬಗ್ಗೆ ಶೇರ್ ಮಾಡಿಕೊಳ್ಳಿ...!

ಹೆಂಡತಿಯೂ ಸ್ನಾನ ಮುಗಿಸಿ ಬರುತ್ತಿಂದತೆಯೇ ಗಂಡನೂ ಸಹ ಸ್ನಾನ ಮಾಡಲೂ ಅವಸರವಾಗಿ ಬಾತ್'ರೂಮ್'ಗೆ ಹೋಗುತ್ತಾನೆ. ಅಷ್ಟರಲ್ಲೇ ಯಾರೋ ಮನೆಯ ಬೆಲ್ ಮಾಡುತ್ತಾರೆ. ಹೆಂಡತಿಯು ಅವಸರವಾಗಿ ಒಂದು ಟವೆಲ್ ಸುತ್ತಿಕೊಂಡು ಬಾಗಿಲು ತೆರೆಯಲು ಕೆಳಗೆ ಬರುತ್ತಾಳೆ. ಬಾಗಿಲು ತೆರೆದು ನೋಡಿದಾಗ ಹೊರಗಡೆ ಪಕ್ಕದ ಮನೆಯವನು ಎದುರಿಗಿರುತ್ತಾನೆ. ಈಕೆ ವಿಷಯವೇನೆಂದು ಕೇಳುವ ಮೊದಲೇ ಅವನು, "ನೀವು ನಿಮ್ಮ ಮೇಲಿರುವ ಟವೆಲ್ ತೆಗೆದರೆ ನಾನು ನಿಮಗೆ ಎಂಟು ಸಾವಿರ ರುಪಾಯಿ ಕೊಡುತ್ತೇನೆ" ಎಂದು ಹೇಳುತ್ತಾನೆ. ಸ್ವಲ್ಪ ಸಮಯ ಯೋಚಿಸಿದ ನಂತರ ಆಕೆ ಟವೆಲ್ ತೆಗೆದು ಬೆತ್ತಲೆಯಾಗಿ ಆತನ ಮುಂದೆ ನಿಲ್ಲುತ್ತಾಳೆ.

ಕೆಲವು ಸೆಕೆಂಡ್'ಗಳ ಕಾಲ ಆಕೆಯನ್ನು ನೋಡಿದ ಅವನು ಅವಳ ಕೈಗೆ ಎಂಟು ಸಾವಿರ ರುಪಾಯಿ ಕೊಟ್ಟು ಅಲ್ಲಿಂದ ಹೋಗುತ್ತಾನೆ. ಅವಳು ಆ ದುಡ್ಡನ್ನು ತೆಗೆದುಕೊಂಡು ಬಾಗಿಲು ಹಾಕಿ ಟವೆಲ್ ಸುತ್ತಿಕೊಂಡು ಮೇಲೆ ಹೋಗುತ್ತಾಳೆ. ಅಷ್ಟರಲ್ಲೇ ಸ್ನಾನ ಮುಗಿಸಿ ಈಚೆ ಬಂದ ಗಂಡ, "ಯಾರು ಬಂದಿದ್ದು?" ಎಂದು ಕೇಳುತ್ತಾನೆ. "ಪಕ್ಕದ ಮನೆಯವನು", ಎಂದು ಹೆಂಡತಿ ಹೇಳುತ್ತಲೆ ಗಂಡ, "ಓ...! ಹೌದಾ...!, ನಾನು ಅವನಿಗೆ ಸಾಲ ಕೊಟ್ಟಿದ್ದ ಎಂಟು ಸಾವಿರ ರುಪಾಯಿ ಬಗ್ಗೆ ಏನಾದರು ಹೇಳಿದ್ನಾ...?" ಎಂದು ಕೇಳುತ್ತಾನೆ.


ಕಥೆಯ ನೀತಿ:- "ನೀವು ನಿಮ್ಮ ಷೇರುದಾರರ ಜೊತೆ ಕ್ರೆಡಿಟ್ ಮತ್ತು ನಿರ್ಣಾಯಕ ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಂಡಲ್ಲಿ ಅನಗತ್ಯ ಅಪಾಯಗಳಿಂದ ದೂರ ಉಳಿಯಬಹುದು"

ಬಾಸ್'ಗೆ ಮೊದಲು ಮಾತಾಡಲು ಬಿಡಿ...!

ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೇಲ್ಸ್ ರೆಪ್ರೆಸೆಂಟೇಟಿವ್, ಅಡ್ಮಿನಿಸ್ಟ್ರೇಶನ್ ಕ್ಲರ್ಕ್ ಮತ್ತು ಮ್ಯಾನೇಜರ್ ಮೂವರು ಒಂದು ದಿನ ಮಧ್ಯಾಹ್ನ ಊಟಕ್ಕಾಗಿ ಹೋಗುತ್ತಿರುವಾಗ ಮಧ್ಯ ದಾರಿಯಲ್ಲಿ ಅವರಿಗೊಂದು ತುಂಬಾ ಹಳೆಯ ಕಾಲದ ಎಣ್ಣೆ ದೀಪವೊಂದು ಸಿಗುತ್ತದೆ. ಆ ದೀಪವನ್ನು ನೋಡಿದೊಡನೆ ಅವರೆಲ್ಲರಿಗೂ ಅಲಾದ್ದಿನ್ ಕಥೆ ನೆನಪಾಗಿ ಕಥೆಯಲ್ಲಾದಂತೆ ಈ ದೀಪದಿಂದಲೂ ಸಹ ಜೆನೀ ಬರಬಹುದೆಂದು ಊಹಿಸಿ ಅದನ್ನು ಜೋರಾಗಿ ಉಜ್ಜಲಾರಂಭಿಸುತ್ತಾರೆ. ಅವರಂದುಕೊಂಡಂತೆ ಅದರಿಂದ ಜೆನೀ ಆಚೆ ಬಂದು, "ನಾನು ನಿಮ್ಮೆಲ್ಲರ ಒಂದೊಂದು ಆಸೆಯನ್ನು ಈಡೇರಿಸುತ್ತೇನೆ. ನಿಮಗೇನು ಬೇಕೋ ಕೇಳಿ" ಎಂದು ಹೇಳುತ್ತದೆ. ಅದರ ಮಾತನ್ನು ಕೇಳುತ್ತಲೇ ಅಡ್ಮಿನಿಸ್ಟ್ರೇಶನ್ ಕ್ಲರ್ಕ್ "ನಾನು ಮೊದಲು! ನಾನು ಮೊದಲು!" ಎನ್ನುತ್ತಾ, "ನಾನು ಬಹಾಮಾಸ್ ದ್ವೀಪಕ್ಕೆ ಹೋಗಿ ಪ್ರಪಂಚದ ಯಾವುದೇ ಗೊಡವೆಗಳಿಲ್ಲದೆ ಸಮುದ್ರದಲ್ಲಿ ತುಂಬಾ ಜೋರಾಗಿ ಸ್ಪೀಡ್ ಬೋಡ್ ಓಡಿಸಲು ಇಷ್ಟಪಡುತ್ತೇನೆ", ಎಂದು ಕೇಳುತ್ತಾನೆ. ಹೀಗೆ ಹೇಳಿದ ತಕ್ಷಣವೇ ಅವನು ಮಾಯವಾಗುತ್ತಾನೆ. "ನೆಕ್ಸ್ಟ್ ನಾನು! ನೆಕ್ಸ್ಟ್ ನಾನು!" ಎನ್ನುತ್ತಲೇ ಸೇಲ್ಸ್ ರೆಪ್ರೆಸೆಂಟೇಟಿವ್, "ನನಗೆ ಹವಾಯೀ ದ್ವೀಪಕ್ಕೆ ಹೋಗಿ ಅಲ್ಲಿನ ಕಡಲತೀರದಲ್ಲಿ ಒಂದು ಸುಂದರ ಯುವತಿಯ ಕೈಯಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಾ ನನಗಿಷ್ಟವಾದ ಡ್ರಿಂಕ್ಸ್ ಕುಡಿಯಬೇಕೆಂಬ ಆಸೆ", ಎನ್ನುತ್ತಲೇ ಅವನು ಕೂಡ ಮಾಯವಾಗುತ್ತಾನೆ. ಆಗ ಜೆನೀಯೂ ಮ್ಯಾನೇಜರ್'ಗೆ,"ಈಗ ನಿನ್ನ ಸರದಿ, ನಿನಗೇನು ಬೇಕೋ ಕೇಳು" ಎನ್ನುತ್ತದೆ. ಆಗ ಮ್ಯಾನೇಜರ್,"ಊಟದ ನಂತರ ಅವರಿಬ್ಬರೂ ಆಫೀಸ್'ನಲ್ಲಿ ಇರಬೇಕು" ಎನ್ನುತ್ತಾನೆ.


ಕಥೆಯ ನೀತಿ:- "ಯಾವಾಗಲೂ ನಿಮ್ಮ ಬಾಸ್'ಗೆ ಮೊದಲು ಮಾತನಾಡಲು ಬಿಡಿ"

Saturday, 13 September 2014

ನೀವು ಮಾಡುವ ಉದ್ಯೋಗದ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯಿರಲಿ

ಒಬ್ಬ ಸುಂದರ ಸನ್ಯಾಸಿನಿಯು ಲಿಫ್ಟ್'ಗಾಗಿ ದಾರಿಯಲ್ಲಿ ಕಾಯುತ್ತ ನಿತ್ತಿದ್ದಳು. ಆಗ ಅದೇ ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಪಾದ್ರಿ ಆಕೆಯನ್ನು ಡ್ರಾಪ್ ಮಾಡಲು ತನ್ನ ಕಾರಿನಲ್ಲಿ ಹತ್ತಿಸಿಕೊಳ್ಳುತ್ತಾನೆ. ಕಾರು ಹತ್ತಿದ ಸನ್ಯಾಸಿನಿ ತನ್ನ ನೀಳವಾದ ಸುಂದರ ಕಾಲುಗಳು ಕಾಣುವಂತೆ ತಾನು ಧರಿಸಿದ್ಧ ಗೌನನ್ನು ಮೊಣಕಾಲಿನಿಂದ ಸ್ವಲ್ಪ ಮೇಲಕ್ಕೆ ಸರಿಸಿ ಕುಳಿತುಕೊಳ್ಳುತ್ತಾಳೆ.
ಕಾರಿನಲ್ಲಿ ಚಲಿಸುತ್ತಿರುವಾಗ ಇನ್ನೇನು ಅಪಘಾತವಾಯ್ತು ಅನ್ನುವಷ್ಟರಲ್ಲಿ ಒಂದು ದೊಡ್ಡ ಅವಘಡದಿಂದ ಪಾರಾಗುವಂತೆ ಕಾರನ್ನು ನಿಯಂತ್ರಿಸಿದ ಪಾದ್ರಿ ಅದೇ ಸಮಯದಲ್ಲಿ ಗುಟ್ಟಾಗಿ ತನ್ನ ಕೈಯನ್ನು ಸನ್ಯಾಸಿನಿಯ ಕಾಲುಗಳ ಮೇಲೆ ಹಾಕುತ್ತಾನೆ. ಆಗ ಸನ್ಯಾಸಿನಿ, "ಫಾದರ್, 129ನೇ ಕೀರ್ತನೆಯನ್ನು ನೆನಪು ಮಾಡಿಕೊಳ್ಳಿ" ಎನ್ನುತ್ತಾಳೆ. ಹಾಗೆ ಹೇಳಿದ ತಕ್ಷಣವೇ ಪಾದ್ರಿಯು ತನ್ನ ಕೈಯನ್ನು ಹಿಂದೆಗೆಯುತ್ತಾನೆ. ಆದರೆ ಕಾರಿನ ಗೇರ್ ಬದಲಾಯಿಸುವ ನೆಪದಲ್ಲಿ ಪಾದ್ರಿಯು ಮತ್ತೊಮ್ಮೆ ತನ್ನ ಕೈಯನ್ನು ಆಕೆಯ ಕಾಲುಗಳ ಮೇಲೆ ಹಾಕುತ್ತಾನೆ. ಸನ್ಯಾಸಿನಿಯು ಆಗಲೇ ಹೇಳಿದಂತೆಯೇ, " ಫಾದರ್, 129ನೇ ಕೀರ್ತನೆಯನ್ನು ನೆನಪು ಮಾಡಿಕೊಳ್ಳಿ" ಎನ್ನುತ್ತಾಳೆ. ಅದಕ್ಕೆ ಪಾದ್ರಿಯು, "ತಪ್ಪಾಯ್ತು ದಯವಿಟ್ಟು ಕ್ಷಮಿಸಿ" ಎಂದು ಕ್ಷಮೆಯಾಚಿಸುತ್ತಾನೆ. ಅಷ್ಟರಲ್ಲಿ ಸನ್ಯಾಸಿನಿ ಹೋಗಬೇಕಿದ್ದ ಜಾಗ ಬರುತ್ತದೆ ಆಕೆ ಕಾರಿನಿಂದ ಇಳಿದು ಕೋಪ ಮಾಡಿಕೊಂಡು ಹೊರಟು ಹೋಗುತ್ತಾಳೆ. ನಂತರ ಪಾದ್ರಿಯು ತುಂಬಾ ವೇಗವಾಗಿ ತನ್ನ ಚರ್ಚ್'ಗೆ ತೆರಳಿ 129ನೇ ಕೀರ್ತನೆಯಲ್ಲಿ ಏನಿದೆ ಎಂದು ಕುತೂಹಲದಿಂದ ನೋಡುತ್ತಾನೆ.
ಆ 129ನೇ ಕೀರ್ತನೆಯಲ್ಲಿ, "ಮತ್ತಷ್ಟು ಮುಂದಕ್ಕೆ ಹೋಗಿ, ನೀವು ವೈಭವವನ್ನು ಕಾಣುತ್ತೀರಿ" ಎಂದು ಬರೆದಿತ್ತು.
ಕಥೆಯ ನೀತಿ:- "ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಸರಿಯಾದ ಸಂಪೂರ್ಣ ಮಾಹಿತಿ ಇಲ್ಲವಾದಲ್ಲಿ ನೀವು ಅತ್ಯದ್ಭುತ ಅವಕಾಶಗಳಿಂದ ವಂಚಿತರಾಗುತ್ತೀರಿ"

Friday, 12 September 2014

In news paper


ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಒಂದು ಚಿಕ್ಕ ಅಭಿಪ್ರಾಯ ಅಂಕಣ

ಸುಮ್ಮನಿರಬೇಕಾದರೆ ಮೇಲಿನ ಸ್ಥಾನದಲ್ಲಿರಿ...!

ಕಾಗೆಯೊಂದು ದಿನಪೂರ್ತಿ ಯಾವುದೇ ಕೆಲಸ ಮಾಡದೆ ಒಂದು ಮರದ ರೆಂಬೆಯ ಮೇಲೆ ಕುಳಿತಿತ್ತು. ಇದನ್ನು ಗಮನಿಸಿದ ಒಂದು ಮೊಲ ಆ ಕಾಗೆಯ ಬಳಿ ಬಂದು, "ನಾನು ಸಹ ನಿನ್ನ ಹಾಗೆಯೇ ದಿನಪೂರ್ತಿ ಯಾವುದೇ ಕೆಲಸ ಮಾಡದೆ ಸುಮ್ಮನೆ ಕುಳಿತುಕೊಳ್ಳಬಹುದೇ?" ಎಂದು ಕೇಳಿತು. ಅದಕ್ಕೆ ಕಾಗೆಯು, "ಖಂಡಿತವಾಗಿಯೂ ಕುಳಿತುಕೊಳ್ಳಬಹುದು" ಎಂದು ಉತ್ತರಿಸಿತು. ಇದರಿಂದ ಖುಷಿಯಾದ ಮೊಲವು ಕಾಗೆ ಕುಳಿತಿದ್ದ ರೆಂಬೆಯ ಕೆಳಗಡೆಯೇ ನೆಲದಲ್ಲಿ ಕುಳಿತು ವಿಶ್ರಮಿಸಲಾರಂಭಿಸಿತು.
ತಕ್ಷಣವೇ ಒಂದು ನರಿಯು ಆ ಮೊಲದ ಮೇಲೆ ಎಗರಿ ಅದನ್ನು ಕೊಂದು ತಿಂದು ಹಾಕಿತು.
ಕಥೆಯ ನೀತಿ:- "ಏನೂ ಮಾಡದೆ ಸುಮ್ಮನೆ ಕುಳಿತಿರಬೇಕೆಂದರೆ ನೀವೂ ತುಂಬಾ ಮೇಲಿನ ಸ್ಥಾನದಲ್ಲಿರಬೇಕು"